ಉಜ್ಜೀವನ ಮಳೆ ಬೇಕು ನನ್ ಕರ್ತನೆ |
ನಮ್ಮ ಮೇಲೆ ಸುರಿಸಯ್ಯ ಭಾರತವ ನೆನೆಸಯ್ಯ |
ಯೇಸುವೆ ಯೇಸುವೇ ನಮ್ಮನು ಅಭಿಷೇಕಿಸು |
ಅಗ್ನಿಯುಳ್ಳ ಆತ್ಮನಿಂದ ನಮ್ಮನ್ನು
ಅಗ್ನಿಯಾಗಿ ಮಾರ್ಪಡಿಸು |ಉಜ್ಜೀವನ|
1.ಒಣಗಿದ ಎಲುಬೆಲ್ಲ ಕಟಕಟನೆ ಶಬ್ಧವಾಗಿ
ಒಂದು ದೊಡ್ಡ ಸೈನ್ಯವಾಗಿ ನಿಲಬಾರದೇ |
ಶ್ವಾಸ ತಂದ ಬಿರುಗಾಳಿ ಬೀಸಬಾರದೇ |
ಉಜ್ಜೀವನ ದೇಶದಲ್ಲಿ ತರಬಾರದೇ |ಉಜ್ಜೀವನ |
2.ನಿರೀಕ್ಷೆಗೂ ಮೀರಿದ ಭಯಂಕರ ಕೃತ್ಯಗಳ
ನಡೆಸಿ ನಮ್ ದೇಶವನ್ನು ನೀ ನಡುಗಿಸು |
ಆತ್ಮನೆ ಪ್ರವಾಹದಂತೆ ನೀ ಚಲಿಸಯ್ಯಾ |
ಅಂತ್ಯಕಾಲ ಸುಗ್ಗಿಗಾಗಿ ಸಿದ್ಧಮಾಡಯ್ಯಾ |
3.ಮನುಷ್ಯರನ್ನು ಹಿಡಿಯುವ ಬೆಸ್ತರಾಗಿ ಮಾಡಯ್ಯ
ಆತ್ಮಗಳ ನೀಡದಿದ್ದರೆ ಪ್ರಾಣವನ್ನು ತೆಗೆದುಕೊಳ್ಳಯ್ಯ
ಏನೇ ಬಂದರು ಮುನ್ನುಗ್ಗುವ ಶಕ್ತಿ ನೀಡಯ್ಯಾ
ಒಂದೇ ಬಾಳು ನಿನಗಾಗಿಯೆ ಬಾಳಬೇಕಯ್ಯಾ |
--Ujjivana Male Beku